ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಹೆರಂಜಾಲು ಯಕ್ಷ ತಿರುಗಾಟದ 30ರ ಸಂಭ್ರಮ - 2016

ಲೇಖಕರು : ಸಂತು ಆಚಾರ್ಯ
ಶುಕ್ರವಾರ, ಮಾರ್ಚ್ 25 , 2016
ಮಾರ್ಚ್ 16, 2016

ಹೆರಂಜಾಲು ಯಕ್ಷ ತಿರುಗಾಟದ 30ರ ಸಂಭ್ರಮ - 2016

ಕುಂದಾಪುರ : ದಿವಂಗತ ವೆಂಕಟರಮಣ ಗಾಣಿಗರ ನಾಮಾಂಕಿತ ಪ್ರಶಸ್ತಿ ಪುರಸ್ಕಾರ ಹಾಗೂ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರಯಾದಿಯಲ್ಲಿ ಸಕಲ ಸಮುದಾಯದ ದಿಗ್ಗಜ ದಕ್ಷಿಣೋತ್ತರ ಕನ್ನಡ ಜಿಲ್ಲೆ ಮುಖ್ಯವಾಗಿ ಉಡುಪಿ ಜಿಲ್ಲೆಯ ಕಲಾವಿದರನ್ನೊಳಗೊಂಡು ಪೌರಾಣಿಕ ಪ್ರಸಂಗಕಲಾಕುಸುಮ ಯಕ್ಷಗಾನ ಪ್ರದರ್ಶನ ಕುಂದಾಪುರ ಗಾಂಧಿ ಮೈದಾನದಲ್ಲಿ ಎಪ್ರಿಲ್ 16ರ೦ದು ಸಂಪನ್ನಗೊಳ್ಳಲಿದೆ.

ಹೆರಂಜಾಲು ಗೋಪಾಲ ಗಾಣಿಗ
ಯಕ್ಷಗಾನ ಪರಂಪರೆಯಲ್ಲಿ ಸಮಾನವನ್ನು ಕಂಡ ನಾಲ್ಕನೆ ತಲೆಮಾರಿನ ಹೆರಂಜಾಲು ಪರಂಪರೆಯ ಕೊಂಡಿ "ಅಜ್ಜ ಗಣಪಯ್ಯ ಗಾಣಿಗ. ತಂದೆ ವೆಂಕಟರಮಣ ಗಾಣಿಗ. ಇವರ ಮಗ ನಿವೃತ್ತಿಯೆಡೆಗೆ ಕಾಲಿಡುತ್ತಿರುವ ಗೋಪಾಲ ಗಾಣಿಗ. ಮುಂದಿನ ಕುಡಿ ಪಲ್ಲವ ಗಾಣಿಗ." ಇವರ ತಲೆಮಾರಿನ ಪರಂಪರೆಯಿಂದ ಯಕ್ಷಗಾನಕ್ಕೆ ಸಂದ ಕೊಡುಗೆ ಹಾಗು ಸಲ್ಲುತ್ತಿರುವುದು ಶ್ಲಾಘನೀಯ. ಇವರು ಯಕ್ಷಗಾನದಿಂದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎನ್ನುವ ಹೆಮ್ಮೆ ಬಿಟ್ಟರೆ.. ಇವರು ಯಕ್ಷಗಾನದಿಂದ ಪಡೆದುಕೊಂಡದ್ದಕ್ಕಿಂತ ಇವರಿಂದ ಯಕ್ಷಗಾನಕ್ಕಾದ ಕೊಡುಗೆ ಪ್ರತಿಯೊಬ್ಬ ಯಕ್ಷಾಭಿಮಾನಿಗಳು ಹೆರಂಜಾಲು ಪರಂಪರೆಯ ಮೇಲೆ ಅಭಿಮಾನ ಪಡುವಂತದ್ದು. ಅದಕ್ಕೆ ಹೆರಂಜಾಲು ಶಿಶ್ಯವೃಂದವೇ ಸಾಕ್ಷಿ ಅನ್ನಬಹುದು.

ಯಕ್ಷಗಾನದ ಹೆಮ್ಮೆಯ ಶ್ರೇಷ್ಠ ಭಾಗವತರು ಎನಿಸಿರುವ ಹೆರಂಜಾಲು ಗೋಪಾಲ ಗಾಣಿಗರು 1978-79ರಲ್ಲಿ ಡಾ.ಶಿವರಾಮ್ ಕಾರಂತ ಇವರ ನೇತೃತ್ವದ ಯಕ್ಷಗಾನ ಕೇಂದ್ರ ಉಡುಪಿಯಲ್ಲಿ ಗುರುತ್ರಯರಾದ ನೀಲಾವರ ರಾಮಕೃಷ್ಣ ಮಯ್ಯ. ವೆಂಕಟರಮಣ ಗಾಣಿಗ. ಕೋಟ ಮಹಾಬಲ ಕಾರಂತ ಇವರುಗಳ ಗುರುತ್ವದಲ್ಲಿ 5 ವರ್ಷಗಳ ಕಾಲ ಯಕ್ಷಗಾನದ ಎಲ್ಲಾ ಪ್ರಕಾರಗಳನ್ನು ಅಭ್ಯಾಸಿಸಿ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿದರು.

1983ರಲ್ಲಿ ಶ್ರೀ ಮಾರಣಕಟ್ಟೆ ಮೇಳದಲ್ಲಿ ಸಹ ಭಾಗವತರಾಗಿ ಸೇವೆ ಸಲ್ಲಿಸಿದ ಗಾಣಿಗರು ಕಮಲಶಿಲೆ, ಮಂದಾರ್ತಿ, ಸಾಲಿಗ್ರಾಮ, ಶಿರಸಿ, ಪ್ರಸ್ತುತ ಶ್ರೀ ಹಲವು ಮಕ್ಕಳ ತಾಯಿ ಅಮೃತೇಶ್ವರಿ ಮೇಳದ ಶ್ರೀ ಆನಂದ ಸಿ. ಕುಂದರ್ ಇವರ ಧೀಮಂತ ನಿರ್ದೇಶನದಲ್ಲಿ ಸೇವೆ ಸಲ್ಲಿಸುತ್ತಿರುವ ಗಾಣಿಗರು ಬಡಗು ತಿಟ್ಟಿನ ಶ್ರೇಷ್ಠ ಭಾಗವತರು ಎನಿಸಿದ್ದಾರೆ.(ಪ್ರಸ್ತುತ ಅಪಘಾತ ಸಂಭವಿಸಿದ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.)

ಗೋಪಾಲ ಗಾಣಿಗರ ತೀರ್ಥರೂಪರ ಆಶಸೌದ "ಯಕ್ಷಗಾನ ಕೇಂದ್ರ" 1963ರಿಂದ ತೊಡಗಿದ "ಹೆರಂಜಾಲು ಯಕ್ಷಗಾನ ಪ್ರತಿಷ್ಠಾನ (ರಿ) ಯಕ್ಷಬಳಗ ನಾಗೂರು" ಇದರ ಕಾರ್ಯದರ್ಶಿ ಶ್ರೀನಿವಾಸ ದೇವಾಡಿಗ. ಖಜಾಂಚಿ ಶ್ರೀ ಸುಬ್ರಹ್ಮಣ್ಯ ನಾವುಡ. ಸರ್ವಸದಸ್ಯರ ತೀರ್ಮಾನದಂತೆ 2008ರಲ್ಲಿ ಶಿಲನ್ಯಾಸ ಮಾಡಿ 2014-15ರ ನವೆಂಬರ್ 9 ರಂದು ಉದ್ಘಾಟನೆ ಗೊಂಡಿತು.

ಈ ಯಕ್ಷಗಾನ ತರಬೇತಿ ಕೇಂದ್ರದಿಂದ ಉಚಿತವಾಗಿ ಯಕ್ಷಗಾನ ತರಬೇತಿ ನೀಡುತ್ತಾ ಬಂದಿದ್ದು ಆ ಪ್ರಯುಕ್ತ ಯಕ್ಷಗಾನ ಕೇಂದ್ರದಲ್ಲಿ ನಿರಂತರ ತರಬೇತಿ ನೀಡುವ ಸದುದ್ದೇಶದಿಂದ ವೃತ್ತಿ ರಂಗಕ್ಕೆ ವಿದಾಯ ಹಾಡುವುದು ಗಾಣಿಗರಿಗೆ ಅನಿವಾರ್ಯವಾಗಿದೆ.

ಇಂಥಾ ಮಹತ್ವದ ಘಟ್ಟದ ವಿಶೇಷ ಸಂದರ್ಭದಲ್ಲಿ ಹಲವು ಸದುದ್ದೇಶ ಹೊತ್ತು ಕಾರ್ಯಕ್ರಮ ಆಯೋಜಿಸಿ ಕಾರ್ಯಕ್ರಮದಿಂದ ಸಂಗ್ರಹವಾದ ಕ್ಷೇಮ ನಿಧಿಯನ್ನು ಯಕ್ಷಗಾನ ಕಲಾವಿದರಿಗೆ ಯಾವ ಶಾಶ್ವತವಾದ ಬದುಕು ಭದ್ರತೆ ಇಲ್ಲದಕಾರಣ ವೈಯಕ್ತಿಕ ಜೀವನ ಭದ್ರತೆಗಾಗಿ ಹಾಗೂ ಗೋಪಾಲ ಗಾಣಿಗರ ತಂದೆ ತೀರ್ಥರೂಪರ ಸಂಸ್ಮರಣಾ ಕಾರ್ಯಕ್ರಮ ಪ್ರಶಸ್ತಿ ಪುರಾಸ್ಕಾರಗಳಿಗೆ ಹಾಗೂ ಯಕ್ಷಗಾನ ಶಾಲೆಯ ಅಧ್ಯಾಪಕರಿಗೆ ಆಸನದ ವ್ಯವಸ್ಥೆಗೆ ವಿನಿಯೋಗಿಸಲಾಗುವುದು.

ಈ ಒಂದು ಸದುದ್ದೇಶದಿಂದ ಹಮ್ಮಿಕೊಂಡ ಅರ್ಥಪೂರ್ಣ ಕಾರ್ಯಕ್ರಮ ಗೋಪಾಲಗಾಣಿಗರ ನೇತೃತ್ವದಲ್ಲಿ ನಡೆಯಬೇಕಿತ್ತು. ಆದರೆ ಗಾಣಿಗರಿಗೆ ರಸ್ತೆ ಅಪಘಾತ ಸಂಭವಿಸಿ ಕಾಲಿಗೆ ತೀವ್ರತರ ಪೆಟ್ಟು ಬಿದ್ದಕಾರಣ ಗೋಪಾಲ ಗಾಣಿಗರ ಮಗ ಪಲ್ಲವ ಗಾಣಿಗ ಹಾಗೂ ಅವರ ಶಿಶ್ಯವೃಂದ ಮತ್ತು ಅವರ ಅಭಿಮಾನಿಗಳೂ ನಡೆಸಿಕೊಡಲಿದ್ದು... ಈ ಕಾರ್ಯಕ್ರಮಕ್ಕೆ ಕಲಾಪೋಷಕರು ಸಕಲ ಸಮಾಜದ ಅಭಿಮಾನಿ ಬಂಧುಗಳು ಯಕ್ಷಗಾನಾಭಿಮಾನಿಗಳು ಪಾಲ್ಗೊಂಡು ಕ್ಷೇಮ ನಿಧಿಯ ಸಂಗ್ರಹಕ್ಕೆ ಹೆಚ್ಚಿನ ನೆರವು ನೀಡುವಿರೆಂದು ನಂಬಿ ಗೋಪಾಲ ಗಾಣಿಗರು ಈ ಮೂಲಕ ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಂಡಿದ್ದಾರೆ.

"ಅಂದು ನಡೆಯುವ ಯಕ್ಷಗಾನ ಕಾರ್ಯಕ್ರಮದ ವಿಶೇಷ ಆಕರ್ಷಣೆಗಳು ಇಂತಿವೆ"

ಪ್ರಸಂಗ "ಮಹಾಭಾರತ"

*ಕಿಂಢಮಶಾಪ. *ಬಕಾಸುರ ವಧೆ. *ಅಕ್ಷಯಾಂಬರ. *ಭೀಷ್ಮಪರ್ವ. *ಚಕ್ರವ್ಯೂಹ. *ಕರ್ಣಾವಸಾನ. *ರಕ್ತರಾತ್ರಿ.

ಅತಿಥಿಯಾಗಿ: ಸದಾಶಿವ ಅಮೀನ್. ನಗರ ಸುಬ್ರಹ್ಮಣ್ಯ ಆಚಾರ್ಯ. ರವೀಂದ್ರ ಶೆಟ್ಟಿ ಹೊಸಂಗಡಿ. ಹೆಬ್ರಿಗಣೇಶ. ಸುಬ್ರಹ್ಮಣ್ಯ ನಾವುಡ. ರಾಘವೇಂದ್ರ ಹೆಗಡೆ. ಸುಜನ್ ಹಾಲಾಡಿ. ಅಕ್ಷಯ ಹಾಲಾಡಿ. ಪಲ್ಲವ ಗಾಣಿಗ. ಅಶ್ವಿನಿ ಕೊಂಡದಕುಳಿ.

ಬಳ್ಕೋರು ಕೃಷ್ಣಯಾಜಿ. ಐರೋಡಿ ಗೋವಿಂದಪ್ಪ. ಕೋಡಿವಿಶ್ವನಾಥ. ಜಲವಳ್ಳಿ ವಿದ್ಯಾಧರ.ಕೋಟ ಸುರೇಶ. ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ. ಮಾಧವ ನಾಗೂರು. ಕಿನ್ನಿಗೋಳಿ ಮುಖ್ಯಪ್ರಾಣ. ಕಡಬಾ ಪೂವಪ್ಪ. ಕುಮಾರ ಅಭಿಷೇಕ್.

ವಿಶೇಷತೆ:

*ಯಲಗುಪ್ಪ-ಗೋಪಾಲಗಾಣಿಗರ ದ್ವಂದ್ವ ಭಾಗವತಿಕೆ.(ಗಾಣಿಗರ ಆರೋಗ್ಯ ಸುದಾರಿಸಿದಲ್ಲಿ.)
*ಮಯ್ಯ-ಅಮೀನರ ದ್ವಂದ್ವ ಭಾಗವತಿಕೆ.
*ಹಿಲ್ಲೂರು-ನಗರ ಅವರ ದ್ವಂದ್ವ ಭಾಗವತಿಕೆ.
*ಹೊಸಂಗಡಿ-ಹೆಬ್ರಿಯವರ ದ್ವಂದ್ವ ಭಾಗವತಿಕೆ.
*ಅಂಕೋಲ-ಸುಬ್ರಮಣ್ಯ ನಾವುಡ ಅವರ ದ್ವಂದ್ವ ಭಾಗವತಿಕೆ
*ಪಲ್ಲವ-ಅಶ್ವಿನಿ ಕೊಂಡದಕುಳಿಯವರ ದ್ವಂದ್ವ ಭಾಗವತಿಕೆ
*ಬಳ್ಕೂರು-ಅವರ ಮೊಮ್ಮಗ ಕುಮಾರ ಅಭಿಷೇಕ ಅಜ್ಜ ಮೊಮ್ಮಗನ ಜೋಡಿವೇಶ.
*ರಕ್ತರಾತ್ರಿ ಪ್ರಸಂಗ ದೊಂದಿ ಬೆಳಕಿನಲ್ಲಿ.. ಸ್ತ್ರೀ ವೇಷಧಾರಿಗಳಿಂದ..
*ಯಲಗುಪ್ಪ-ಕೃಷ್ಣ, ಶಶಿಕಾಂತ ಶೆಟ್ರ-ಭೀಮ, ಮಾಧವ ನಾಗೂರು-ಕೌರವ.
*19ವರ್ಷದ ಸುಜನ್ ಮತ್ತು ಅಕ್ಷಯ ಇವರಿಂದ ಚಂಡೆಮದ್ದಳೆವಾದನ.
*ಚಂಡೆಯ ಗಂಡುಗಲಿ ಕೋಟ ಶಿವಾನಂದ ಇವರಿಂದ ಏಳು ಚಂಡೆ ಝೇಂಕಾರ.
*ಪರಮೇಶ್ವರ್ ಭಂಡಾರಿ ಇವರಿಂದ ಎಂಟು ಮದ್ದಳೆವಾದನ.
*ಇನ್ನೂ... ಹಲವು ವಿಶೇಷ ಆಕರ್ಷಣೆಗಳು.......
ಇಂಥಾ ಸುಂದರ ಅರ್ಥಪೂರ್ಣ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಆತ್ಮೀಯವಾಗಿ ಆದರದಿಂದ ಆಮಂತ್ರಿಸುವವರು ಪಲ್ಲವ ಗಾಣಿಗ ಹೆರಂಜಾಲು.

ನಿರ್ಮಾಣ ಹ೦ತದಲ್ಲಿ ಹೆರಂಜಾಲು ಯಕ್ಷಗಾನ ಕೇಂದ್ರ



ಕೃಪೆ : facebook


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ